Thursday, May 8, 2025

Dhanalakshmi daye tori baamma / P B Srinivas / ಧನಲಕ್ಷ್ಮೀ ದಯೆ ತೋರಿ ಬಾಮ್ಮ ...


ಧನಲಕ್ಷ್ಮೀ ದಯೆ ತೋರಿ ಬಾಮ್ಮ

ಚಿತ್ರ - ಧನಲಕ್ಷ್ಮಿ/ ಸಂಗೀತ - ಎಂ ರಂಗರಾವ್ / ಗಾಯಕ - ಪಿ ಬಿ ಶ್ರೀನಿವಾಸ್ / ಸಾಹಿತ್ಯ - ಚಿ ಉದಯಶಂಕರ

Dhanalakshmi daye tori baamma

Singer - P B Srinivas / Music - M Rangarao / Lyrics - Chi Udayashankara / Film - Dhanalakshmi

This song is from the Kannada movie Dhanalakshmi, which starred Manjula and Srinath. P B Srinivas is the singer, and M Rangarao has composed the music. Chi Udayashankar wrote the song's lyrics. The actor for this song is Srinath. The devotional song of Godess Dhanalakshmi is extremely significant, regardless of the film's plot and setting. Rangarao, who composed excellent music, and P B Srinivas, who sang the melody, should both be commended at the same time. I've tried playing this song on the keyboard. 

ಶ್ರೀನಾಥ್ ಮಂಜುಳಾ ನಟಿಸಿರುವ ಧನಲಕ್ಷ್ಮೀ ಎಂಬ ಚಿತ್ರದ ಹಾಡು ಇದು. ಹಾಡಿರುವವರು ಪಿ ಬಿ ಶ್ರೀನಿವಾಸ್, ಸಂಗೀತ ನೀಡಿದ್ದಾರೆ ಎಂ ರಂಗರಾವ್ ಅವರು. ಹಾಡಿನ ಸಾಹಿತ್ಯ ಚಿ ಉದಯಶಂಕರ ಅವರದು. ಹಾಡಿಗೆ ನಟಿಸಿದ್ದಾರೆ ಶ್ರೀನಾಥ್ ಅವರು. ಚಿತ್ರದ ಕಥೆ , ಸಂದರ್ಭ ಏನೇ ಇರಬಹುದು ಆದರೆ ಧನಲಕ್ಷ್ಮಿಯ ಸುಂದರ ವರ್ಣನೆ ಇರುವ ಹಾಡಿನ ಸಾಹಿತ್ಯವನ್ನು ಮೆಚ್ಚಲೇ ಬೇಕು ಹಾಗೆಯೆ ಮಧುರವಾಗಿ ಹಾಡಿರುವ ಪಿ ಬಿ ಶ್ರೀನಿವಾಸ್ ಅವರಿಗೂ ಹಾಗು ಉತ್ತಮ ಸಂಗೀತ ಸಂಯೋಜನೆ ನೀಡಿರುವ ರಂಗರಾವ್ ಅವರಿಗೂ ಅಭಿನಂದನೆ ಸಲ್ಲಿಸಬೇಕು .

ಪಾಲ್ಗಡಲಿನಿಂದ ಉದಿಸಿ ಹರಿಯ ವರಿಸಿ | ಕರವೀರ ಪುರದಲ್ಲಿ ಬಂದು ನೆಲೆಸಿ ಗತಿ ನೀನೇ ಎಂದವರ ಕೈ ಬಿಡದೆ ಹರಸಿ | ಕಾಪಾಡುವ ತಾಯೆ ಬಾರೆ ಕನಿಕರಿಸಿ || ಧನಲಕ್ಷ್ಮೀ ದಯೆ ತೋರಿ ಬಾಮ್ಮ ಅಮ್ಮಾ |ಸೌಭಾಗ್ಯ ಲಕ್ಷ್ಮಿ ನೀ ಬಾರಮ್ಮ | ಕಂಗಳಿಗೆ ಕಾಣಿಸದೆ ಎಲ್ಲಿ ಮರೆಯಾಗಿರುವೆ | ಸಿರಿವಂತರ ಸೆರೆಯ ತೊರೆದು ಬಾರಮ್ಮ || ಸನ್ನಿಧಿಗೆ ಬೇಗ ನೀ ದಾರಿ ತೋರಮ್ಮ | ದಿವ್ಯ ದರುಶನ ನೀಡೆ ಒಲಿದು ಬಾರಮ್ಮ | ಬಾಗಿಲಿಗೆ ಬಂದಿರುವ ಭಕುತರ ಬೇಡಿಕೆಯ ತಡೆದರದಿ ಪೂರೈಸಿ ಬೇಗ ಸಲಹಮ್ಮ ||ಧನಲಕ್ಷ್ಮೀ|| ಮಲ್ಲಿಗೆಯ ಮಂಟಪದಿ ನಿನ್ನ ಪೂಜಿಸುವೆ ಸುರಲೋಕದ ಪಾರಿಜಾತ ಅರ್ಪಿಸುವೆ | ಪನ್ನೀರ ಕೊಳದಿಂದ ಹೊನ್ನ ತಾವರೆ ತಂದು | ಸಿರಿ ಪಾದ ಕಮಲಗಳಿಂದೆ ಪೂಜಿಸುವೆ ||ಧನಲಕ್ಷ್ಮೀ||

Wednesday, May 7, 2025

An Ideal Student /Lyrics & Music - Jagadeesh Chandra /ಆದರ್ಶ ವಿದ್ಯಾರ್ಥಿ /...


ಆದರ್ಶ ವಿದ್ಯಾರ್ಥಿ / An Ideal Student

ಸಾಹಿತ್ಯ , ಸಂಗೀತ - ಜಗದೀಶ ಚಂದ್ರ / Lyrics & Music - Jagadeesha Chandra

Subhashitas in Sanskrit are like treasures. Some of the previously read Subhashitas served as the inspiration for this poem. The students of today are not the same as those of the past. Many students today merely wish to pass in order to somehow acquire a government job. Few other students are wealthy and apathetic in their academics. For them, student life consists solely of enjoyment. A true student is one who actively pursues knowledge. Therefore, each student should adhere to specific rules to become a true citizen. Students must have a strong desire to learn. He should avoid being lazy and taking a wrong path. He needs to be pure and understand that knowledge, not wealth, is what matters most.

ಸಂಸ್ಕೃತದ ಸುಭಾಷಿತಗಳು ಎಂದರೆ ಅದು ನಿಧಿಯಿದ್ದಂತೆ. ಅದರಲ್ಲಿ ಈ ಹಿಂದೆ ಓದಿದ್ದ ಕೆಲವು ಸುಭಾಷಿತಗಳನ್ನು ಆಧಾರವಾಗಿಟ್ಟುಕೊಂಡು ಈ ಪದ್ಯವನ್ನು ಬರೆದಿದ್ದೇನೆ. ಹಿಂದಿನ ವಿದ್ಯಾರ್ಥಿಗಳಿಗೂ ಇಂದಿನ ವಿದ್ಯಾರ್ಥಿಗಳಿಗೂ ಅಜಗಜಾಂತರ ವ್ಯತ್ಯಾಸಗಳನ್ನು ಕಾಣಬಹುದು. ಇಂದು ಅನೇಕ ವಿದ್ಯಾರ್ಥಿಗಳು ಕೇವಲ ತೇರ್ಗಡೆ ಹೊಂದಿ, ಹೇಗಾದರೂ ಮಾಡಿ ಒಂದು ಸರ್ಕಾರೀ ಕೆಲಸವನ್ನು ಗಿಟ್ಟಿಸಬೇಕೆಂಬ ಆತುರದಲ್ಲಿರುತ್ತಾರೆ. ಇನ್ನು ಕೆಲವರಿಗೆ ಹೇರಳವಾದ ಆಸ್ತಿಯಿದ್ದು ಅವರಿಗೆ ವಿದ್ಯೆಯಲ್ಲಿ ಆಸಕ್ತಿಯೇ ಇರುವುದಿಲ್ಲ. ವಿದ್ಯಾರ್ಥಿ ಜೀವನ ಎಂದರೆ ಅವರಿಗೆ ಕೇವಲ ಮೋಜು.
ವಿದ್ಯಾರ್ಥಿ ಎಂದರೆ ವಿದ್ಯೆಯನ್ನು ಅರಸಿ ಬಂದವನು ಎಂದರ್ಥ. ವಿದ್ಯಾರ್ಥಿಗಳಿಗೆ ಯಾವುದೇ ಮತ ಅಥವಾ ಧರ್ಮಗಳ ಕಟ್ಟುಪಾಡಿಗಿಂತ ಜ್ಞಾನವನ್ನು ಸಂಪಾದಿಸುವುದೇ ಧರ್ಮವಾಗಿರಬೇಕು. ಹೀಗಾಗಿ ವಿದ್ಯಾರ್ಥಿಯು ಕೆಲವು ಪಾಲನೆಗಳನ್ನು ಪಾಲಿಸಿದರೆ ಒಬ್ಬ ಸತ್ಪ್ರಜೆಯಾಗುವುದರಲ್ಲಿ ಸಂದೇಹವೇ ಇಲ್ಲ. ವಿದ್ಯಾರ್ಥಿಯು ಜ್ಞಾನ ಸಂಪಾದಿಸಲು ಹಾತೊರೆಯುತ್ತಿರಬೇಕು. ಸೋಮಾರಿಯಾಗಿ ದುರ್ಮಾರ್ಗಕ್ಕೆ ಹೋಗಬಾರದು. ಅಂತರಂಗ ಹಾಗು ಬಹಿರಂಗದಲ್ಲಿ ಶುದ್ಧನಾಗಿರಬೇಕು. ವಿದ್ಯಾರ್ಥಿಯಾಗಿರುವಾಗ ಜ್ಞಾನ ಮುಖ್ಯ ಹಣವಲ್ಲ ಎಂಬುದನ್ನು ಅರಿತಿರಬೇಕು.


ಆದರ್ಶ ವಿದ್ಯಾರ್ಥಿ / An Ideal Student

ವಿದ್ಯೆಯನ್ನು ಅರಸಿ ಬಂದ ಮಕ್ಕಳು
ಗುರು ಹಿರಿಯರನ್ನು ಆದರಿಸಬೇಕು ಜ್ಞಾನಕೆ ಹಾತೊರೆಯುತ್ತಿರಬೇಕು ಜ್ಞಾನ ಸುಧಾರಕ ನಾಗಬೇಕು // ಕಲಿಯುವುದಷ್ಟೇ ಧ್ಯೇಯ ವಾಗಬೇಕು ಸೋಮಾರಿತನವನ್ನು ಕಿತ್ತೊಗೆ ಬೇಕು ತೇಜವಂತ ನಾಗಲು ಪಣ ತೊಡಬೇಕು ಕೆಟ್ಟ ಕೆಲಸ ಮಾಡೆನೆಂದು ಸಾರಬೇಕು // ಅಂತರಂಗ ಬಹಿರಂಗ ಶುದ್ಧಿ ಇರಬೇಕು ಆಸ್ತಿಪಾಸ್ತಿ ಹಣದಾಸೆ ದೂರವಿಡಬೇಕು ಜಗದೊಡೆಯನಿಗೆ ಋಣಿಯಾಗಬೇಕು ಸಹಬಾಳ್ವೆ ಪುಣ್ಯವೆಂದು ಅರಿಯಬೇಕು //

Monday, May 5, 2025

Yun Hasraton Ke Daag | Lata Mangeshkar | Madanmohan / यूँ हसरतोंके / लता...


यूँ हसरतोंके / लता मंगेशकर / मदन मोहन /
Yun Hasraton Ke Daag - Lata Mangeshkar - Madan Mohan - Rajendra Krishn / Rag Khamaj
Beautiful, heart-touching lyrics & lovely music. I can say this is an outstanding gazal from the film Adalat; listeners feel proud of compositions like this. Music director Madanmohan and singer Lata Mangeshkar are worth acknowledging. Heart-touching song immortalised by the golden voice of Lata and the histrionic performance of Nargis.

ಮನಮುಟ್ಟುವ ಸಂಗೀತ ನೀಡಿರುವ ಮದನ್ ಮೋಹನ್ ಹಾಗೂ ಗಾಯಕಿ ಲತಾ ಮಂಗೇಶ್ಕರ್, ಗಝಲ್ ಸಾಹಿತ್ಯ ಬರೆದಿರುವ ರಾಜೇಂದ್ರ ಕೃಷ್ಣ ಅವರು ಅಭಿನಂದನಾರ್ಹರು. ಇದು ಕಮಾಜ್ ರಾಗದ ಆಧಾರಿತ ಗೀತೆ. Yun Hasrton Ke Daag - Rag Khamaj, Keyboard - Jagadeesha Chandra Yun hasaraton ke daag mohabbat men dho liye Khud dil se dil ki baat kahi aur ro liye Ghar se chale the ham to khushi ki talaash men Gam raah men khade the wo hi saath ho liye Khud dil se dil ki baat kahi aur ro liye Murajha chuka hai fir bhi ye dil ful hi to hai Ab ap ki khushi ise kaanton men toliye Khud dil se dil ki baat kahi aur ro liye Hothhon ko si chuke to zamaane ne ye kaha Ye chup si kyon lagi hai aji kuchh to boliye Khud dil se dil ki baat kahi aur ro liye +3,60,10, 414 splt Ni2, 72, 29

Radha Madhava vinoda hasaa /TG Lingappa / TG Lingappa, P Sushila /K Prab...


ರಾಧಾ ಮಾಧವ ವಿನೋದ ಹಾಸಾ / Radha Madhava Vinoda Haasaa


In the Kannada cinema industry, the classic movie School Master gained a lot of recognition. The film, which was directed by BR Pantulu, stars B R Pantulu, Udayakumar, B Sarojadevi, Sowkar Janaki, Shivaji Ganesan, and Gemini Ganeshan. The movie has been remade in Hindi, Telugu, Tamil, and Malayalam. In the same mohana raga, this song, Radhamadhava Vinodhahasa, is available in several languages. The Kannada version has vocals by TG Lingappa and P. Suisha. Kanagal Prabhakar Shastri penned the song. T. G. Lingappa is the composer. In this song, lovers perceive themselves as Radha and Madhava. For his own compositions, TG Lingappa has performed alongside Susheela. One craves to listen to the catchy song in Mohana raga repeatedly. I played the keyboard. Please listen to.

ಸ್ಕೂಲ್ ಮಾಸ್ಟರ್ ಎಂಬ ಹಳೆಯ ಚಿತ್ರ ಆ ಕಾಲದಲ್ಲಿ ಬಹಳ ಹೆಸರು ಮಾಡಿತ್ತು. ಬಿ. ಆರ್. ಪಂತಲು ಅವರು ನಿರ್ದೇಶಿಸಿ ನಟಿಸಿದ್ದ ಆ ಚಿತ್ರದಲ್ಲಿ ಬಿ ಆರ್ ಪಂತುಲು, ಉದಯಕುಮಾರ್, ಸರೋಜಾದೇವಿ, ಸಾವ್ಕಾರ್ ಜಾನಕಿ, ಶಿವಾಜಿ ಗಣೇಶನ್ ಮತ್ತು ಜೆಮಿನಿ ಜೆಮಿನಿಗಣೇಶನ್ ಅವರು ನಟಿಸಿದ್ದರು. ಈ ಸಿನೆಮಾ ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲಿ ರಿಮೇಕ್ ಆಯಿತು. ರಾಧಾಮಾಧವ ವಿನೋದಹಾಸ ಎಂಬ ಈ ಹಾಡು ಅದೇ ಮೋಹನ ರಾಗದಲ್ಲಿ ಇತರ ಭಾಷೆಗಳಲ್ಲಿಯೂ ಕೇಳಬಹುದು. ಕನ್ನಡದಲ್ಲಿ ಟಿ ಜಿ ಲಿಂಗಪ್ಪ ಹಾಗು ಪಿ ಸುಶೀಲ ಹಾಡಿದ್ದಾರೆ. ಸಾಹಿತ್ಯ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರದ್ದು. ಸಂಗೀತ ಟಿ ಜಿ ಲಿಂಗಪ್ಪ. ಪ್ರೇಮಿಗಳು ತಮ್ಮನ್ನು ರಾಧಾ ಮಾಧವರಾಗಿ ಕಲ್ಪಿಸಿಕೊಂಡು ಪ್ರೇಮಲೋಕದಲ್ಲಿ ತೇಲಾಡುವ ಗೀತೆ ಇದು. ಟಿ ಜಿ ಲಿಂಗಪ್ಪನವರು ತಮ್ಮದೇ ಸಂಗೀತಕ್ಕೆ ಸುಶೀಲಾ ಅವರೊಂದಿಗೆ ಹಾಡಿದ್ದಾರೆ. ಮತ್ತೆ ಮತ್ತೆ ಕೇಳಬೇಕೆನಿಸುವ ಮೋಹನ ರಾಗದ ಮಧುರ ಗೀತೆ. ಕೀಬೋರ್ಡ್ ನಲ್ಲಿ ನುಡಿಸಿದ್ದೇನೆ. ಕೇಳಿ.


ರಾಧಾ ಮಾಧವ ವಿನೋದ ಹಾಸಾ / ಸಂಗೀತ - ಟಿ ಜಿ ಲಿಂಗಪ್ಪ , ಗಾಯಕರು - ಟಿ ಜಿ ಲಿಂಗಪ್ಪ , ಪಿ ಸುಶೀಲ , ಚಿತ್ರ - ಸ್ಕೂಲ್ ಮಾಸ್ಟರ್ / ಸಾಹಿತ್ಯ - ಕಣಗಾಲ್ ಪ್ರಭಾಕರ ಶಾಸ್ತ್ರಿ / ಕೀಬೋರ್ಡ್ - ಜಗದೀಶ ಚಂದ್ರ

Music - T G Lingappa / Singers - T G Lingappa, P Sushila / Lyrics - Kanagal Prabhakara Shastri / Keyboard - Jagadeesha Chandra ರಾಧಾ ಮಾಧವ ವಿನೋದ ಹಾಸ ಯಾರೂ ಮರೆಯದ ಪ್ರೇಮ ವಿಲಾಸ // ಮಾಗಿ ಮಲ್ಲಿಗೆ ಹೂ ಬನದಲ್ಲಿ ಭೋಗಿ ಹುಣ್ಣಿಮೆ ರಾತ್ರಿಯಲಿ ಸ್ವರ್ಗ ಭೂಮಿ ಎಲ್ಲಾ ದಾಟಿ ಆಡಿದ ಮಾತೇ ರಾಗ ವಿಲಾಸ // ಜೀವನವೆಲ್ಲ ಗೋಕುಲವಾಗಿ ಒಲವೇ ಯಮುನಾ ನದಿಯಾಗಿ ನಾವೇ ರಾಧಾ ಮಾಧವರಾಗಿ ಆಡುವ ಮಾತೇ ಪ್ರೇಮ ವಿಲಾಸ //

T280 L291 Split T054, L148 R77 Spd100

Sunday, May 4, 2025

Nagunaguta nali nali / PBS / GK Venkatesh / Hunsur Krishnamurthy / Banga...


ನಗುನಗುತಾ ನಲಿ ನಲಿ / Nagunaguta nali nali

ಪಿ ಬಿ ಶ್ರೀನಿವಾಸ್ / ಜಿ ಕೆ ವೆಂಕಟೇಶ್ / ಹುಣಸೂರ್ ಕೃಷ್ಣಮೂರ್ತಿ / ಬಂಗಾರದ ಮನುಷ್ಯ P B Srinivas / G K Venkatesh / Hunsur Krishnamurthy / Bangarada Manushya

ಬಂಗಾರದ ಮನುಷ್ಯ ಚಿತ್ರಕ್ಕೆ ಹುಣಸೂರ್ ಕೃಷ್ಣಮೂರ್ತಿ ಅವರು ಬರೆದಿರುವ ಈ ಹಾಡು ಒಂದು ಮರೆಯದ ಹಾಡು. ನಮ್ಮ ಸುತ್ತಮುತ್ತಲಿನ ಪ್ರಕೃತಿ, ತಾಯಿಯ ಪ್ರೀತಿ, ಬಾಲ್ಯದಲ್ಲಿ ಗೆಳೆಯರೊಂದಿಗೆ ಕಳೆವ ಕ್ಷಣಗಳು, ಯೌವ್ವನ ಬಂದಾಗಿನ ಕಾಲ, ಮದುವೆಯ ರಸಕ್ಷಣ, ಮುಂದೆ ಸಾಗುವ ಸಂಸಾರ ನೌಕೆ, ಅದರಲ್ಲಿನ ಏರುಪೇರುಗಳು, ನಂತರ ಬರುವ ಮುದಿತನ ಎಲ್ಲವನ್ನೂ ಒಂದೇ ಹಾಡಿನಲ್ಲಿ ಹಿಡಿದಿಟ್ಟಿದ್ದಾರೆ. ಏನೇ ಆದರೂ ಜೀವನವನ್ನು ಅನುಭವಿಸಿ ನಗುನಗುತಾ ಸಂತೋಷದಿಂದಿರಿ ಎಂಬುದೇ ಈ ಕವನದ ಸಾರಾಂಶ.

ಬಂಗಾರದ ಮನುಷ್ಯ ಚಿತ್ರದ ಈ ಹಾಡಿನಲ್ಲಿ ರಾಜಕುಮಾರ್ ಅವರ ಅಭಿನಯ, ಪಿ ಬಿ ಶ್ರೀನಿವಾಸ್ ಅವರ ಗಾಯನ, ಹುಣಸೂರ್ ಕೃಷ್ಣಮೂರ್ತಿ ಅವರ ಸಾಹಿತ್ಯ, ಜಿ ಕೆ ವೆಂಕಟೇಶ್ ಅವರ ಅಮೋಘ ಸಂಗೀತ ಎಲ್ಲವೂ ಒಂದಾಗಿ ರಸದೌತಣವನ್ನೇ ನೀಡಿದೆ .

It is a memorable song that was written by Hunsur Krishnamurthy for the movie Bangarada Manushya. The same song encompasses the natural world around us, the mother's love, childhood memories spent with friends, youth, marriage, old age, our daily lives, their ups and downs, and the charm. The poem's summary, however, is that we should be content and joyful.

This song blends the wonderful melody of GK Venkatesh, the lyrics of Hunsur Krishnamurthy, the vocals of PB Srinivas, and Rajkumar's performance. 

This hit song from Bangarada Manushya (Screened in Bangalore for more than 2 years) is very sweet and lively. nagu naguta nali means always be happy and cheerful.

ನಗು ನಗುತಾ ನಲಿ ನಲಿ ಏನೇ ಆಗಲಿ ಎಲ್ಲಾ ದೇವನ ಕಲೆ ಎ೦ದೇ ನೀ ತಿಳಿ ಅದರಿ೦ದ ನೀ ಕಲಿ / ಜಗವಿದು ಜಾಣ ಚೆಲುವಿನ ತಾಣ ಎಲ್ಲೆಲ್ಲು ರಸದೌತಣ ನಿನಗೆಲ್ಲೆಲ್ಲೂ ರಸದೌತಣ ಲತೆಗಳು ಕುಣಿದಾಗ ಹೂಗಳು ಬಿರಿದಾಗ ನಗು ನಗುತಾ ನಲಿ ನಲಿ ಏನೇ ಆಗಲಿ / ತಾಯಿ ಒಡಲಿನ ಕುಡಿಯಾಗಿ ಜೀವನ ಮೂಡಿ ಬ೦ದು ಚೇತನ ತಾಳಲೆ೦ದು ಅನುದಿನ ಅವಳೆದೆ ಅನುರಾಗ ಕುಡಿಯುತ ಬೆಳೆದಾಗ ನಗು ನಗುತಾ ನಲಿ ನಲಿ ಏನೇ ಆಗಲಿ / ಗೆಳೆಯರ ಜೊತೆಯಲಿ ಕುಣಿಕುಣಿದು ಬೆಳೆಯುವ ಸೊಗಸಿನ ಕಾಲವಿದು ಮು೦ದೆ ಯೌವ್ವನ ಮದುವೆ ಬ೦ಧನ ಎಲ್ಲೆಲ್ಲೂ ಹೊಸ ಜೀವನ ಅಹ ಎಲ್ಲೆಲ್ಲೂ ಹೊಸ ಜೀವನ ಜೊತೆಯದು ದೊರೆತಾಗ ಜೊತೆಯದು ದೊರೆತಾಗ ಮೈಮನ ಮರೆತಾಗ ನಗು ನಗುತಾ ನಲಿ ನಲಿ ಏನೇ ಆಗಲಿ/ ಏರುಪೇರಿನ ಗತಿಯಲ್ಲಿ ಜೀವನ ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ ಅದರೊಳು ಹೊಸದಾದ ರುಚಿ ಇದೆ ಸವಿ ನೋಡ ನಗು ನಗುತಾ ನಲೀ ನಲೀ ಏನೇ ಆಗಲಿ /


Saturday, May 3, 2025

Ramakrishna Devotional song/ ಸಾಹಿತ್ಯ- ಕುವೆಂಪು /ಮೂಲ ಗಾಯನ- ಶ್ರೀ ಪುರುಷೋತ್ತಮ...


ಕುವೆಂಪು ಅವರು ಬರೆದಿರುವ ಈ ಶ್ರೀ ರಾಮಕೃಷ್ಣ ಭಕ್ತಿಗೀತೆಯು ಬಹಳ ಅರ್ಥಗರ್ಭಿತವಾಗಿದೆ. ಧರ್ಮಸಮನ್ವಯತೆ ಬೋಧಿಸಿದ, ಮತಭೇದದ ವಿಷವನ್ನು ಹೋಗಲಾಡಿಸಿದ ರಾಮಕೃಷ್ಣರನ್ನು ನವಯುಗದ ಅವತಾರ ಎಂದು ಸಂಬೋಧಿಸಿದ್ದಾರೆ.  ಎಲ್ಲಿ ನೋಡಿದರೂ ದ್ವೇಷ, ಅಶಾಂತಿ, ಜಾತಿ ಮತ್ಸರ ಮೊದಲಾದ ದುಷ್ಟ ಶಕ್ತಿಗಳೇ ತಾಂಡವವಾಡುತ್ತಿರುವ ಇಂದಿನ ದಿನಗಳಲ್ಲಿ ಈ ಭಕ್ತಗೀತೆಯ ಸಂದೇಶ ಶಾಂತಿ ನೆಮ್ಮದಿಯನ್ನು ಎಲ್ಲರಿಗೂ ಕೊಡಲಿ. ಜೈ ಶ್ರೀ ರಾಮಕೃಷ್ಣ.  

Kuvempu wrote this devotional song on Sri Ramakrishna, and it makes perfect sense. In recent years, Ramakrishna has been recognised as the avatar. Religious conflict, caste rivalry, enmity, and turmoil have become a common occurrence. The aforementioned disorders were eradicated by Sri Ramakrishna's teachings. This devotional song's message is to promote harmony and serenity of mind for mankind.

ಶ್ರೀ ರಾಮಕೃಷ್ಣ ಭಕ್ತಿಗೀತೆ / ಸಾಹಿತ್ಯ - ಕುವೆಂಪು / ಮೂಲ ಗಾಯನ - ಶ್ರೀ ಪುರುಷೋತ್ತಮಾನಂದ / ಕೀಬೋರ್ಡ್ - ಜಗದೀಶ ಚಂದ್ರ 

Devotional song on Sri Ramakrishna / Lyrics - Kuvempu / Original singer Sri Purushottamananda / Keyboard - Jagadeesha Chandra 

ಬಾ ಶ್ರೀಗುರುದೇವನೆ ಬಾ / 
ಶ್ಯಾಮಲ ಕಾನನ ಶೃಂಗ ತರಂಗಿತ  
ಸಹ್ಯಾದ್ರಿಯ ಸನ್ಮಂದಿರಕೆ 
ಚಿನ್ಮಯ ಮಮ ಹೃನ್ಮಂದಿರಕೆ || 

ವಂಗಮಾತೆಯಲಿ ಜನ್ಮವನೆತ್ತಿ  
ದಿವ್ಯಸಮನ್ವಯ ಧರ್ಮವ ಬಿತ್ತಿ
ಮತಭೇದದ ವಿಷವನು ಹೋಗಾಡಿ 
ಲೋಕದ ದೃಷ್ಟಿಗೆ ಸಮತೆಯ ನೀಡಿ 
ಕಾಪಾಡಿದ ಪಾವನ ಮೂರುತಿಯೇ ಬಾ  ||

ಹೇ ನವಯುಗದವತಾರ   
ಪೂರ್ವದಿಗಂತದಿ ಕಾಂತಿಯು ಮೂಡಿ 
ನಾಡಿನ ಕತ್ತಲೆಯನು ಹೋಗಾಡಿ  
ಮೈದೋರುವ ತೆರದಲಿ ನೀನಿಂದು
ನಮ್ಮೀ ವನಗೃಹಕೈತಂದು   
ನಮ್ಮೆದೆಗತ್ತಲ ಪರಿಹರಿಸಿ 
ಸುಖಶಾಂತಿಯ ಕಾಂತಿಯ ಬರಿಸಿ 
ಕೃಪೆಗೈ, ಓ ಮಮ ದೀನಬಂಧು  ಬಾ  || 

T076, R191 Spd95 Sustain

Friday, May 2, 2025

Ganesha pancharatna /Keyboard / Jagadeesha Chandra / ಗಣೇಶ ಪಂಚರತ್ನ / ಶಂಕರ...


ಮುದಾಕರಾತ್ತ ಮೋದಕಂ / Mudakaratha Modakam in Ragamalike - Lord Ganesha Devotional - Shri Shankaracharya - In keyboard - B S Jagadeesha Chandra 

ಹಂಸಧ್ವನಿ  ರಾಗ 
ಮುದಾಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಮ್ ।
ಕಳಾಧರಾವತಂಸಕಂ ವಿಲಾಸಿಲೋಕ ರಕ್ಷಕಮ್ ।
ಅನಾಯಕೈಕ ನಾಯಕಂ ವಿನಾಶಿತೇಭ ದೈತ್ಯಕಮ್ ।
ನತಾಶುಭಾಶು ನಾಶಕಂ ನಮಾಮಿ ತಂ ವಿನಾಯಕಮ್ ॥ 1 ॥  

ಮಲಹರಿ ರಾಗ 
ನತೇತರಾತಿ ಭೀಕರಂ ನವೋದಿತಾರ್ಕ ಭಾಸ್ವರಮ್ ।
ನಮತ್ಸುರಾರಿ ನಿರ್ಜರಂ ನತಾಧಿಕಾಪದುದ್ಢರಮ್ ।
ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಮ್ ।
ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಮ್ ॥ 2 ॥
 
ಕಲ್ಯಾಣವಸಂತ 
ಸಮಸ್ತ ಲೋಕ ಶಂಕರಂ ನಿರಸ್ತ ದೈತ್ಯ ಕುಂಜರಮ್ ।
ದರೇತರೋದರಂ ವರಂ ವರೇಭ ವಕ್ತ್ರಮಕ್ಷರಮ್ ।
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಮ್ ।
ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಮ್ ॥ 3 ॥

ಕುಂತಲವರಾಳಿ 
ಅಕಿಂಚನಾರ್ತಿ ಮಾರ್ಜನಂ ಚಿರಂತನೋಕ್ತಿ ಭಾಜನಮ್ ।
ಪುರಾರಿ ಪೂರ್ವ ನಂದನಂ ಸುರಾರಿ ಗರ್ವ ಚರ್ವಣಮ್ ।
ಪ್ರಪಂಚ ನಾಶ ಭೀಷಣಂ ಧನಂಜಯಾದಿ ಭೂಷಣಮ್ ।
ಕಪೋಲ ದಾನವಾರಣಂ ಭಜೇ ಪುರಾಣ ವಾರಣಮ್ ॥ 4 ॥

ಮಧ್ಯಮಾವತಿ 
ನಿತಾಂತ ಕಾಂತಿ ದಂತ ಕಾಂತಿ ಮಂತ ಕಾಂತಿ ಕಾತ್ಮಜಮ್ ।
ಅಚಿಂತ್ಯ ರೂಪಮಂತ ಹೀನ ಮಂತರಾಯ ಕೃಂತನಮ್ ।
ಹೃದಂತರೇ ನಿರಂತರಂ ವಸಂತಮೇವ ಯೋಗಿನಾಮ್ ।
ತಮೇಕದಂತಮೇವ ತಂ ವಿಚಿಂತಯಾಮಿ ಸಂತತಮ್ ॥ 5 ॥

ಹಂಸಧ್ವನಿ 
ಮಹಾಗಣೇಶ ಪಂಚರತ್ನಮಾದರೇಣ ಯೋಽನ್ವಹಮ್ ।
ಪ್ರಜಲ್ಪತಿ ಪ್ರಭಾತಕೇ ಹೃದಿ ಸ್ಮರನ್ ಗಣೇಶ್ವರಮ್ ।
ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಮ್ ।
ಸಮಾಹಿತಾಯು ರಷ್ಟಭೂತಿ ಮಭ್ಯುಪೈತಿ ಸೋಽಚಿರಾತ್ ॥

ಬೀಸುವ ಪದ - Folk song sung while grinding grains / ಕನ್ನಡ ಜಾನಪದ ಹಾಡು Keyb...

ಬೀಸುವ ಪದ   Folk song sung while grinding grains.  Folk song of Karnataka    ಕನ್ನಡ ಜಾನಪದ ಹಾಡು  ಕೀಬೋರ್ಡ್ - ಜಗದೀಶ ಚಂದ್ರ  Keyboard - Jagadeesha ...