ಬಸವೇಶ್ವರ ವಚನ
ಬಸವಣ್ಣನವರ ಪ್ರತಿಯೊಂದು ವಚನದಲ್ಲೂ ಏನಾದರೊಂದು ಸಂದೇಶವಿರುತ್ತದೆ. ಇಲ್ಲಿ ದೇವರ ಮುಂದೆ ಭಕ್ತನೊಬ್ಬನ ಸಮರ್ಪಣಾ ಭಾವವನ್ನು ಕಾಣಬಹುದು.
ಭಕ್ತನು ದೇವರಿಗೆ ತನ್ನನ್ನು ತಾನು ಸಂಪೂರ್ಣವಾಗಿ ಸಮರ್ಪಿಸಿಕೊಂಡಾಗ ಆಗ ದೇವರೇ ಅವನಿಗೆ ತಂದೆ, ತಾಯಿ, ಬಂಧು ಬಳಗ ಎಲ್ಲವೂ. ದೇವರು ತನ್ನನ್ನು ಹಾಲಲ್ಲಾದರೂ ಹಾಕಲಿ, ನೀರಲ್ಲಾದರೂ ಹಾಕಲಿ, ಹಾಕುವುದು ಅವನ ಧರ್ಮ, ಅನುಭವಿಸುವುದು ತನ್ನ ಧರ್ಮ ಎಂದು ಹೇಳುತ್ತಾನೆ. ದೇವರನ್ನು ಸಮರ್ಪಣಾಭಾವದಿಂದ ಪೂರ್ಣವಾಗಿ ನಂಬಿ, ಅವನು ಏನು ಮಾಡಿದರೂ ಅದನ್ನು ನಾನು ಅನುಭವಿಸುತ್ತೇನೆ, ದೇವರು ತಾಯಿಯು ಕಂದನನ್ನು ರಕ್ಷಿಸುವಂತೆ ತನ್ನನ್ನು ರಕ್ಷಿಸುತ್ತಾನೆ ಎಂಬ ಭರವಸೆ ಮೂಡಿಸಿಕೊಳ್ಳುತ್ತಾನೆ. ಮುಗ್ಧ ಮಗುವೊಂದು ತಂದೆ ತಾಯಿಯ ರಕ್ಷಣೆಯಲ್ಲಿ ಧೈರ್ಯವಾಗಿ ಇರುವಂತೆ ಇಲ್ಲಿ ಭಕ್ತನು ದೇವರನ್ನು ನಂಬಿ ಧೈರ್ಯದಿಂದ ಇರುತ್ತಾನೆ.
ದೇವರು ಇದ್ದನೋ ಇಲ್ಲವೋ ಎಂದು ಪರಿತಪಿಸುವುದಕ್ಕಿಂತ ಅವನು ಇದ್ದಾನೆ, ನನ್ನನ್ನು ಕಾಪಾಡುತ್ತಾನೆ ಎಂಬ ಭಾವನೆಯಿಂದ ಒಳ್ಳೆಯ ಬಾಳನ್ನು ನಡೆಸಿದರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ಸಂದೇಶವನ್ನು ಈ ವಚನ ನೀಡುತ್ತದೆ.
ತಂದೆ ನೀನು ತಾಯಿ ನೀನು, ಎಂಬ ಬಸವಣ್ಣನವರ ಈ ವಚನಕ್ಕೆ ಅಹಿರ್ ಭೈರವ್ ರಾಗದಲ್ಲಿ ಸಂಯೋಜಿಸಿ ಕೀಬೋರ್ಡ್ನಲ್ಲಿ ನುಡಿಸಿದ್ದೇನೆ. ಕೇಳಿ ಆನಂದಿಸಿ, ಪ್ರೋತ್ಸಾಹಿಸಿ. ಯೂಟ್ಯೂಬ್ ನ ಹಾಡಿನ ಕೊಂಡಿ ಇಲ್ಲಿದೆ. ವಾದ್ಯ ಸಂಗೀತದೊಂದಿಗೆ ಹಾಡು ಶೀರ್ಷಿಕೆ ತೆರೆಯ ಮೇಲೆ ಬರುತ್ತದೆ. ಸಂಗೀತ ಸಾಹಿತ್ಯ ಎರಡನ್ನು ಆನಂದಿಸಬಹುದು.
No comments:
Post a Comment