Saturday, May 31, 2025

Ee Sambhashane / Upendra Kumar / S Janaki / SPB / ವಿಜಯನಾರಸಿಂಹ/ ಕೀಬೋರ್ಡ್ ...


ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ

Ee Sambhashane (These are our conversations about love)

S Janaki, S P Balasubhramanyam; Music: Upendrakumar; Lyrics: Vijaya Naarasimha; Keyboard - Jagadeesha Chandra
ಎಸ್ ಜಾನಕಿ , ಎಸ್ ಪಿ ಬಾಲಸುಬ್ರಮಣ್ಯಂ; ಸಂಗೀತ: ಉಪೇಂದ್ರಕುಮಾರ್ ; ಸಾಹಿತ್ಯ: ವಿಜಯ ನಾರಸಿಂಹ / ಕೀಬೋರ್ಡ್: ಜಗದೀಶ ಚಂದ್ರ

Puttanna Kanagal is the director of the movie. S. Janaki and S. P. Balasubrahmanyam sing, and Upendrakumar composes the music. Beautiful lyrics have been written by Vijaya Naarasimha. Pure Kannada, the regional style, and Kannada combined with Sanskrit all have their own unique beauty while writing lyrics. Here, the "combination of Sanskrit and Kannada" style has added a certain grandeur. Srinath and Satyapriya, two lovers, sing this beautiful song. 
Their romance is a brand-new poem with a charming core. 
Like a river, the song's joy, excitement, and fantasy are reminiscent of the new wave and are gentle and delightful.
Their song is as beautiful as the spring blossom, as pure and delicate as the beauty wave.
As a result, this song's melody, lyrics, and singing style all work together to make it worth listening to multiple times. Music fans are delighted by Upendrakumar's exquisite adoption of the Mohana or Bhupali raga.


ಇದು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಧರ್ಮಸೆರೆ ಎಂಬ ಚಿತ್ರದ ಹಾಡು.  ಸಂಗೀತ ನಿರ್ದೇಶನ ಉಪೇಂದ್ರಕುಮಾರ್ ಅವರದ್ದು,  ಗಾಯನ ಎಸ್ ಜಾನಕಿ ಹಾಗು ಎಸ್ ಪಿ ಬಾಲಸುಬ್ರಮಣ್ಯಂ ಅವರದ್ದು. ವಿಜಯನಾರಸಿಂಹ ಅವರು ಸೊಗಸಾದ ಸಾಹಿತ್ಯ ನೀಡಿದ್ದಾರೆ. ಕನ್ನಡ ಭಾಷೆಗೆ ಅಚ್ಚಕನ್ನಡದಲ್ಲಿ,  ಪ್ರಾದೇಶಿಕ ಭಾಷೆಯಲ್ಲಿ ಹಾಗೂ ಸಂಸ್ಕೃತ ಮಿಶ್ರಿತ ಕನ್ನಡದಲ್ಲಿ ತನ್ನದೇ ಆದ ಸೌಂದರ್ಯವಿರುತ್ತದೆ. ಇಲ್ಲಿ ಸಂಸ್ಕೃತ ಮಿಶ್ರಿತ ಕನ್ನಡವು ಪ್ರಯೋಗವಾಗಿ ಒಂದು ರೀತಿಯ ಗಾಂಭೀರ್ಯವನ್ನು ತಂದಿದೆ. ಇಬ್ಬರು ಪ್ರಣಯಿಗಳು, ಶ್ರೀನಾಥ್ ಮತ್ತು ಸತ್ಯಪ್ರಿಯ ಹಾಡುವ ಪ್ರಣಯ ಗೀತೆ ಇದು. 
ನಮ್ಮ ಪ್ರೇಮ ಸಂಭಾಷಣೆಯು ಹೊಸದಾಗಿಯೂ, ರಸಭರಿತ ಕಾವ್ಯದಂತೆಯೂ ಮಧುರವಾಗಿದೆ. 
ನಮ್ಮ ಹಾಡು ಗಾನ ಗಂಗೆಯಾಗಿ,  ಲಾಸ್ಯ,  ಹಾಸ್ಯದಿಂದಲೂ ಶೃಂಗಾರಭರಿತವಾಗಿ ಮಧುರವಾಗಿದೆ. 
ನಮ್ಮ ಈ ಹಾಡು ಅಬ್ಬರದ ಕಡಲಿನಂತೆ ಮೆರೆದು,  ಮೊರೆದು, ಹೊಸದಾದ ರಾಗಾಧಾರೆಯಂತೆ ಹರಿದು ಜೇನುತುಂಬಿದಂತಿದೆ. 
ನಮ್ಮ ಹಾಡು ಚೈತ್ರಮಾಸದ ಚಿಗುರಿನ ಚೆಲುವಂತೆ, ಸೌಂದರ್ಯದ ಅಲೆಯಂತೆ, ನಿರ್ಮಲವಾಗಿಯೂ,  ಕೋಮಲವಾಗಿಯೂ ಇದೆ. 
ಹೀಗೆ ಈ ಹಾಡಿನಲ್ಲಿ, ಗಾಯನ ಶೈಲಿ,  ಸಾಹಿತ್ಯ ಮತ್ತು ರಾಗಸಂಯೋಜನೆ ಎಲ್ಲವು ಮಿಳಿತವಾಗಿ ಮತ್ತೆ ಮತ್ತೆ ಕೇಳುವಂತೆ ಮಾಡುತ್ತದೆ. ಮೋಹನ ಅಥವಾ ಭೂಪಾಲಿ ರಾಗವನ್ನು ಆಧರಿಸಿ ಉಪೇಂದ್ರಕುಮಾರ್ ಅವರು ಸೊಗಸಾದ ಹಾಡನ್ನು ಸಂಗೀತ ಪ್ರಿಯರಿಗೆ ನೀಡಿದ್ದಾರೆ. 

ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ || ಅತಿ ನವ್ಯ ರಸ ಕಾವ್ಯ ಮಧುರ ಮಧುರ ಮಧುರ ಪ್ರೇಮ ಗಾನ ಕದಲಾಸ್ಯ ಮೃದುಹಾಸ್ಯ ಶೃಂಗಾರ ಭಾವ ಗಂಗ ಸುಂದರ ಸುಲಲಿತ ಮಧುರ ಮಧುರ ಮಧುರ ಧೀರ ಶರದಿ ಮೆರೆವಂತೆ ಮೊರೆವಂತೆ ಹೊಸ ರಾಗ ಧಾರೆಯಂತೆ ಮಂಜುಳ ಮಧುಮಯ ಮಧುರ ಮಧುರ ಮಧುರ ಚೈತ್ರ ತಂದ ಚಿಗುರಂತೆ ಚೆಲುವಂತೆ ಸೌಂದರ್ಯ ಲಹರಿಯಂತೆ ನಿರ್ಮಲ ಕೋಮಲ ಮಧುರ ಮಧುರ ಮಧುರ



Friday, May 30, 2025

Kannada enuvudu /ಕನ್ನಡ ಎನ್ನುವುದು ಜೀವನದಿ / ಎಚ್ ಎಸ್ ವೆಂಕಟೇಶಮೂರ್ತಿ /ಸಂಗೀತ -...


ಕನ್ನಡ ಎನ್ನುವುದು ಜೀವನದಿ 
ಎಚ್ ಎಸ್ ವೆಂಕಟೇಶಮೂರ್ತಿ  
ಸಂಗೀತ - ಆಶಾ ಬದರಿನಾಥ್ ಕೀಬೋರ್ಡ್ - ಜಗದೀಶ ಚಂದ್ರ 
Kannada enuvudu Jeevanadi / H S Venkatesha Murthy
Music - Asha Badarinath,  Keyboard - Jagadeesha Chandra

In this poem, H S V likens the Kannada language to a river that has forests and mountains on either side. He contrasts Karnataka's characteristics with those of well-known ancient poets. He likens Harihara to the water falls, Kumara Vyasa to the Mansoon rains, Ratnakara Varni to lakes with lotus blossoms, Pampa and Ranna to the heights, and Vachanakara to pleateau. He also talks about the other significant aspects of Karnataka, such as the rainy season over Sahyadri, the coastline region's beauty with its waves, and Mysore's well-known jasmine garland. He has made every effort to include the most significant aspects, despite the fact that it is impossible to include all of them in a single poem. The music includes a catchy melody composed by Smt. Asha Badarinath. I tried using my keyboard in the same style. 
ಇಲ್ಲಿ ವೆಂಕಟೇಶ ಮೂರ್ತಿ ಅವರು ಕರ್ನಾಟಕ ಹಾಗು  ಕನ್ನಡ ಭಾಷೆಯ ಅಭಿಮಾನವನ್ನು ಕವನದ ಮೂಲಕ ಹಂಚಿಕೊಂಡಿದ್ದಾರೆ. ಕನ್ನಡ ಭಾಷೆಯು ಒಂದು ಜೀವನದಿ ಇದ್ದಂತೆ,  ಎಂದಿಗೂ ಬತ್ತದು,  ಅದರ ಎರಡೂ ಬದಿಯಲ್ಲಿ ಸೊಗಸಾದ ಗಿರಿವನಗಳು ಹರಡಿಕೊಂಡಿವೆ ಎನ್ನುತ್ತಾರೆ. ಪಂಪ ರನ್ನರು ಕರ್ನಾಟಕದ ಮೇರು ಶಿಖರಗಳಾದರೆ,  ವಚನಕಾರರು ವಿಸ್ತಾರವಾದ ಬಯಲು ಪ್ರದೇಶದಂತೆ, ರತ್ನಾಕರವರ್ಣಿಯು ತಾವರೆಯ ಕೊಳದಂತೆ,  ಹರಿಹರನು ಧುಮುಕುವ ಜಲಪಾತದಂತೆ ಹಾಗೂ ಕುಮಾರವ್ಯಾಸನು ಮುಂಗಾರಿನ ಮಳೆಯಂತೆ ಕಾವ್ಯಧಾರೆಯನ್ನೇ ಹರಿಸಿದ್ದಾನೆ ಎನ್ನುತ್ತಾರೆ. ಕರ್ನಾಟಕದ ಸಹ್ಯಾದ್ರಿಯ ಮೇಲೆ ಸುರಿವ ಮಳೆ,  ಕರಾವಳಿಯಲ್ಲಿನ ಸಮುದ್ರ,  ಅದರ ಅಲೆಗಳು,  ಘಮಘಮ ಮೈಸೂರಿನ ಮಲ್ಲಿಗೆಯ ಹಾರ ಇವೆಲ್ಲವನ್ನೂ ಕವನದಲ್ಲಿ ಮೂಡಿಸಿ ಅಭಿಮಾನ ಮೆರೆದಿದ್ದಾರೆ.  ಇಡೀ ಕರ್ನಾಟಕದ ಎಲ್ಲ ಸೊಗಸನ್ನು ಒಂದು ಪುಟ್ಟ ಪದ್ಯದಲ್ಲಿ ತರಲು ಸಾಧ್ಯವಿಲ್ಲದಿದ್ದರೂ ಮುಖ್ಯವಾದ ಎಲ್ಲವನ್ನೂ ವರ್ಣಿಸಿದ್ದಾರೆ.  ಇದಕ್ಕೆ ಶ್ರೀಮತಿ ಆಶಾ ಬದರಿನಾಥ್ ಅವರು ಸುಶ್ರಾವ್ಯವಾದ ಸಂಗೀತವನ್ನು ಒದಗಿಸಿದ್ದಾರೆ.  ಅದನ್ನೇ ನಾನು ಕೀಬೋರ್ಡ್ ನಲ್ಲಿ ನುಡಿಸಲು ಪ್ರಯತ್ನಿಸಿದ್ದೇನೆ.  

ಕನ್ನಡ ಎನ್ನುವುದು ಜೀವನದಿ   ಗಿರಿವನ ಸಂಪದ ಎಂಬುದು ಎರಡು ಬದಿ 
ಆ ಆ ಆ s s s  ...   ಆ ಆ ಆ s s s  ... ಆ ಆ ಆ s s s  ...//
ಪಂಪ ಮಹಾಚಲ ಜೋಡಿ ಶಿಖರಗಳು  ರನ್ನನ ಉನ್ನತ ಧವಳಗಿರಿ 
ಶಿವಶರಣರ ವಿಸ್ತಾರದ ಬಯಲು  ಧುಮ್ಮಿಕ್ಕುವ ಹರಿಹರನ ಝರಿ 
ಧುಮ್ಮಿಕ್ಕುವ ಹರಿಹರನ ಝರಿ  ಆ ಆ ಆ s s s  .... //
ಸುಳಿ ಮಿಂಚಿನ ಸೆಳೆ ಮುಂಗಾರಿನ ಮಳೆ   ಕುಮಾರವ್ಯಾಸನ ರಸಧಾರೆ 
ಎದೆಯಗಲಕು ಕೆಂದಾವರೆ ಅರಳಿದ  ಕವಿವರ ರತ್ನಾಕರನ ಕೆರೆ ಆ ಆ ಆ s s s  ...//
ಸಹ್ಯಾದ್ರಿಯ ಮಲೆ  ಧಾರಾಪುರಿ ಹೊಳೆ  ಕಡಲ ತಡಿಯ ಘನ ವಿಸ್ತಾರ 
ಮಲೆ ಘಟ್ಟದ ತುದಿ  ಕಡಲಿನ ಅಬ್ಬರ  ಮೈಸೂರಿನ ಮಲ್ಲಿಗೆ ಹಾರ 
ಮೈಸೂರಿನ ಮಲ್ಲಿಗೆ ಹಾರ    ಆ ಆ ಆ s s s  ...//

Wednesday, May 28, 2025

Dehake Usire / Salil Choudhary / SPB & Anita Choudhary/ Keyboard - Jagad...


ದೇಹಕೆ ಉಸಿರೇ ಸದಾ ಭಾರಾ / Body is valuable as long as it can breathe

ಚಿತ್ರ - ಚಿನ್ನ ನಿನ್ನ ಮುದ್ದಾಡುವೆ / ಸಂಗೀತ - ಸಲೀಲ್ ಚೌಧರಿ / ಗಾಯಕರು - ಎಸ್ ಪಿ ಬಿ ಮತ್ತು ಅನಿತಾ ಚೌಧರಿ / ಸಾಹಿತ್ಯ - ಆರ್ ಏನ್ ಜಯಗೋಪಾಲ್ / ಕೀಬೋರ್ಡ್ - ಜಗದೀಶ ಚಂದ್ರ 

Film: Chinna Ninna Muddaduve; Music: Salil Choudhary; Singers: SPB & Anita Choudhary; Lyrics: R N Jayagopal; Keyboard: Jagadeesha Chandra

RN Jayagopal has penned a song to open the hearts of the impoverished people who were born into this earth. The music was composed by Salil Chowdhury. Raga Natabhairav and Keeravani make a lovely combination. Here, you can enjoy the flavour of harmonium and singing without the noisy background instruments. The song is rendered by Anitha Chowdary and SP Balasubrahmanyam. The titular characters are Indira and Ambareesh. This is a song that people who rely on charity by a girl dancing to it and singing catchily in the streets sing. 

The body is valuable as long as it can breathe. The impoverished also view their possessions, jewellery, and gold as a source of self-worth. 

Despite the wind, the life lamp continues to glow. Desire and hope endure even when poverty causes the tears to dry up. 

No one in this world is impoverished, according to what the Creator has said. When God sees the inequality of our own creation—the rich and the poor—he laughs. 

There is so much poverty that the impoverished use threads from outdated clothing. They continue to live a challenging existence in the hopes of finding happiness.

ಈ ಲೋಕದಲ್ಲಿ ಹುಟ್ಟಿದ ಬಡವರ ಮನದಾಳದ ಮಾತನ್ನು ಹಾಡಿನ ರೂಪದಲ್ಲಿ ತೆರೆದಿಟ್ಟಿದ್ದಾರೆ, ಆರ್ ಏನ್ ಜಯಗೋಪಾಲ್ ಅವರು. ಸಾಹಿತ್ಯಕ್ಕೆ ಸಮನಾಗಿ ಸಲೀಲ್ ಚೌಧರಿ ಅವರು ಸೊಗಸಾದ ಸಂಗೀತ ಒದಗಿಸಿದ್ದಾರೆ. ರಾಗ ನಟಭೈರವ್ ಹಾಗೂ ಕೀರವಾಣಿ ರಾಗಗಳ ಮಿಶ್ರಣದ ರಾಗ ಮನಮೋಹಕವಾಗಿದೆ. ಅಬ್ಬರದ ಹಿನ್ನೆಲೆ ವಾದ್ಯಗಳಿಲ್ಲದೆ ಗಾಯನ, ಹಾಗೂ ಹಾರ್ಮೋನಿಯಂ ವಾದ್ಯದ ಸವಿಯನ್ನು ಇಲ್ಲಿ ಸವಿಯಬಹುದು. ಹಾಡಿರುವ ಕಲಾವಿದರು ಎಸ್ ಪಿ ಬಾಲಸುಬ್ರಮಣ್ಯಂ ಹಾಗು ಬಾಲ ಕಲಾವಿದೆ ಅನಿತಾ ಚೌಧರಿ ಅವರು. ನಟನೆ ಅಂಬರೀಷ್ ಹಾಗೂ ಬಾಲನಟಿ ಇಂದಿರಾ ಅವರು. ರಸ್ತೆಗಳಲ್ಲಿ ಸುಶ್ರಾವ್ಯವಾಗಿ ಹಾಡುತ್ತ ಅದಕ್ಕೆ ತಕ್ಕಂತೆ ಬಾಲಕಿಯೊಬ್ಬಳು ನರ್ತಿಸುತ್ತಾ ಅದರಿಂದ ಸಿಗುವ ಭಿಕ್ಷೆಯಿಂದ ಜೀವನ ಸಾಗಿಸುವವರು ಹಾಡುವ ಹಾಡು ಇದು.

ದೇಹಕ್ಕೆ ಉಸಿರಿದ್ದರೆ ಬೆಲೆ ಇಲ್ಲವಾದಲ್ಲಿ ಅದಕ್ಕೆ ಬೆಲೆಯೇ ಇಲ್ಲ. ಹಾಗೆಯೆ ಬಡವರಾದರೂ ಅವರಿಗೆ ಸ್ವಾಭಿಮಾನವೇ ಆಸ್ತಿ, ಒಡವೆ ಬಂಗಾರ ಎಲ್ಲವು.

ಗಾಳಿ ಇದ್ದರೂ ಬದುಕೆಂಬ ಹಣತೆ ಉರಿಯುತ್ತಲೇ ಇರುತ್ತದೆ. ಹಾಗೆಯೆ ಕಣ್ಣೀರು ಬತ್ತಿಹೋದರೂ ಆಸೆ ಎಂಬುದು ಚಿಗುರುತ್ತಲೇ ಇರುತ್ತದೆ.

ಈ ಲೋಕದಲ್ಲಿ ಯಾರೂ ಬಡವರಲ್ಲ, ಯಾರೂ ಶ್ರೀಮಂತರಲ್ಲ ಎಂದು ಸೃಷ್ಟಿಕರ್ತ ಬರೆದರೂ ನಾವೇ ಬೇಧಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ನೋಡಿ ಮೇಲೆ ಕುಳಿತ ಭಗವಂತ ನಗುತ್ತಾನೆ.

ಬಟ್ಟೆ ಹರಿದರೂ ಅದರಿಂದ ಸಿಗುವ ದಾರವನ್ನು ಉಪಯೋಗಿಸುವಷ್ಟು ಬಡವರು ಇದ್ದಾರೆ. ಹುಟ್ಟಿದ ಮೇಲೆ ಬದುಕಲೇ ಬೇಕು ಬದುಕನ್ನು ಹಸನಾಗಿಸಬೇಕು ಎಂಬ ಆಸೆಯಿಂದ ಕಷ್ಟ ಪಟ್ಟು ಬದುಕುತ್ತಾರೆ.


ದೇಹಕೇ ಉಸಿರೇ.. ಸದಾ ಭಾರ ಇಲ್ಲ ಆ..ಧಾ...ರ sss
ಮಾನವೇ ನಮ್ಮ ಆಸ್ತಿಯಮ್ಮ ಒಡವೆ ಬಂಗಾರ //
ಬದುಕಿನ ಹಣತೆ ಗಾಳಿಯಲ್ಲು ಉರಿದಿದೇ ಏಕೋ
ಬತ್ತಿದಾ ಕಣ್ಣೀರಲೂ ಆಸೆ ಇದೆ ಇನ್ನೇಕೋ //
ಬರೆದವ ಮೇಲೆ ಕುಳಿತು ನೋಡಿ ನಗುವ ತಾನೇನೇ
ಬಡವ ಶ್ರೀಮಂತರ ಮಾಡಿದವರು ನಾ..ವೇನೇ..//
ಹರಿದ ಉಡುಪಿಂದ ನೂಲ ತೆಗೆದು ಹೊಲಿವ ಬಡವ ತಾನೇ
ಬದುಕ ಬೇಕಾ..ಗಿದೆ ಬದುಕುವೆವು ಹೀಗೇನೇ //

+6 Sa Ballad3D Spd115 Vol35 St20 A3

Sunday, May 25, 2025

Aluvudyatako Ranga / Purandaradasaru /ಅಳುವುದು ಯಾತಕೊ ರಂಗ / ಪುರಂದರದಾಸರು


ಅಳುವುದು ಯಾತಕೊ ರಂಗ / ಪುರಂದರದಾಸರು
Aluvudyatako Ranga (Ranga, why are you crying?) / Purandaradasaru
Purandaradasa states that this devotional song was composed in honour of Beluru Chennakesava. This serves as both a lullaby and a way to comfort the weeping Balakrishna. The song's lyrics describe the birth of Krishna, his early years spent with Yashoda, and the miracle he accomplished. Purandara Dasa asks whether he experienced any bad visions for his bravery, if he fractured his leg dancing on the snake Kalinga, if he hurt his finger raising Govardhan Hill, etc. These were all from his childhood adventures. Purandara Dasa wonders if the factors mentioned above are the source of his tears.

ಬೇಲೂರಿನ ಚೆನ್ನಕೇಶವ ದೇವರ ಮೇಲೆ ಪುರಂದರದಾಸರು ಬರೆದಿರುವ ದೇವರನಾಮ ಇದು. ಆದರೆ ಈ ದೇವರನಾಮವನ್ನು ಜೋಗುಳವನ್ನಾಗಿ ಮಾಡಿ, ಹಾಗೆಯೇ ಅಳುವ ಬಾಲಕೃಷ್ಣನನ್ನು ಸಮಾಧಾನ ಮಾಡುವ ಹಾಡನ್ನಾಗಿಯೂ ಪರಿವರ್ತಿಸಿದ್ದಾರೆ. ಈ ಮೂಲಕ ಕೃಷ್ಣನ ಹುಟ್ಟು, ಯಶೋದೆಯ ಬಳಿ ಕಳೆದ ಬಾಲ್ಯದಿನಗಳು, ಪುಟ್ಟ ಮಗುವಾಗಿ ಮಾಡಿದ ಪವಾಡ ಎಲ್ಲವನ್ನು ಚಿತ್ರಿಸಿದ್ದಾರೆ. ಈ ಬಾಲ್ಯದ ಕಾಲದಲ್ಲಿ ಮಾಡಿದ ಸಾಹಸ ಕೃತ್ಯಗಳಿಂದ ದೃಷ್ಟಿ ತಾಕಿತೇ, ಕಾಳಿಂಗನ ಮೇಲೆ ನರ್ತಿಸಿದುದಕ್ಕೆ ಕಾಲು ಉಳುಕಿತೇ, ಗೋವರ್ಧನ ಗಿರಿಯನ್ನು ಬೆರಳಲ್ಲಿ ಎತ್ತಿದುದಕ್ಕೆ ಬೆರಳು ನೋವಾಯಿತೇ ಎಂದು ಪ್ರಶ್ನಿಸಿ ಅದಕ್ಕಾಗಿ ಅಳುತ್ತಿರುವಿಯೇನೋ ಎಂದು ಕೇಳುತ್ತಾರೆ. ಸಮಯದ ಅಭಾವದಿಂದಾಗಿ ಮೂರು ಚರಣಗಳನ್ನು ನುಡಿಸಿಲ್ಲ. ನುಡಿಸಿರುವ ಉಳಿದ ಚರಣದಂತೆಯೇ ಅದನ್ನೂ ಹಾಡಬಹುದು.

ಅಳುವದು ಯಾತಕೊ ರಂಗಾ | ಅತ್ತರೆ ಅಂಜಿಸುವನೋ ಗುಮ್ಮಾ |ಪ| ಜೋ ಜೋ ಜೋ ಜೋ ಪುಟ್ಟಿದ ಏಳು ದಿನದಲ್ಲಿ ಕೊಂದೆ ದುಷ್ಟ ಪೂತನಿಯಾ /
ವಿಷ ಮೊಲೆ ಹಾಲನು ಉಂಡಾ ಕಾರಣ ದೃಷ್ಟಿ ಯು ತಾಕಿತೆ ಕಂದಯ್ಯ // ಜೋ ಜೋ ಜೋ ಜೋ ಶರಣು ವೇಲಾಪುರದ ಚೆಲುವ ಚೆನ್ನಿಗರಾಯ /
ಶರಣರ ಸಲಹುವ ದೊರೆ ನೀನಲ್ಲವೇ ಪುರಂದರ ವಿಠಲ ಗೋವಿಂದ // ಜೋ ಜೋ ಜೋ ಜೋ ಈ ಚರಣಗಳನ್ನು ನುಡಿಸಿಲ್ಲ ಬಾಲ್ಯದಿ ಗೋಪಾಲರ ಒಡಗೂಡಿ ಕಾಳಿಂಗನ ಮಡುವನ್ನೂ ಕಲಕಿದ ಕಾರಣ | ಕಾಲು ಉಳುಕಿತೆ ರಂಗಯ್ಯ // ತುರುವ ಕಾಯಲು ಪೋಗಿ | ಭರದಿಂದ ಮಳೆಗೆರೆಯೆ ಬೆರಳಲ್ಲಿ ಬೆಟ್ಟವನೆತ್ತಿದ ಕಾರಣ | ಬೆರಳು ಉಳುಕಿತೇ ಕಂದಯ್ಯ // ವಸುದೇವ ಸುತನಾಗಿ | ಅಸುರರನೂ ಮರ್ದಿಸಿದೆ ಬಸುರಲಿ ಬೊಮ್ಮನ ಪಡೆದ ಕಾರಣ | ಕಿಸರು ತಾಕಿತೆ ರಂಗಯ್ಯ // +9 T280 L291 R65 spd85

Saturday, May 24, 2025

 ದೀನ ದಲಿತರ ಸೇವೆ ದೇವರ ದರ್ಶನಕ್ಕಿಂತ ಮಿಗಿಲು 

- ಜಗದೀಶ ಚಂದ್ರ ಬಿ ಎಸ್ -

ಕಷ್ಟದಲ್ಲಿದ್ದವರಿಗೆ, ಅಸಹಾಯಕರಿಗೆ ಸಹಾಯ ಮಾಡಿದರೆ ಅದು ದೇವರ ದರ್ಶನಕ್ಕಿಂತ ಮಿಗಿಲು ಎಂಬುದು ಈ ಕಥೆಯ ಸಾರಾಂಶ. ಎಲ್ಲ ಧರ್ಮಗಳೂ ಇದನ್ನೇ ಸಾರುತ್ತವೆ. ಇಷ್ಟಾದರೂ ಇನ್ನೂ ಉಗ್ರರು, ಭಯೋತ್ಪಾದನೆ, ರಾಜಕೀಯ ದ್ವೇಷ ಇವೆಲ್ಲವೂ ಶ್ರೀಸಾಮಾನ್ಯನನ್ನು ತತ್ತರ ಗೊಳಿಸುತ್ತಿವೆ. ಇಂಥವರಿಗೆ ಇಂತಹ ಸರಳ ಸತ್ಯ ಎಂದಿಗೆ ಅರಿವಾಗುತ್ತದೋ ದೇವರೇ ಬಲ್ಲ. 

ಈ ಹಿಂದೆ ವಾಟ್ಸಾಪ್ ನಲ್ಲಿ, ಕಷ್ಟದಲ್ಲಿದ್ದವರಿಗೆ, ಅಗತ್ಯವಿದ್ದವರಿಗೆ ಸಹಾಯ ಮಾಡುವುದು ದೇವರಲ್ಲಿ ಭಕ್ತಿ ತೋರಿಸಿದಂತೆ ಎಂಬ ಒಂದು ಸಂದೇಶ ಬಂತು. ನಾನು ಅದಕ್ಕೆ ಉತ್ತರಿಸಿ ಲಿಯೋ ಟಾಲ್ಸ್ಟಾಯ್ ಅವರ ಕಥೆಯೊಂದನ್ನು ನೆನಪಿಸಿದ್ದೆ. ಅದಕ್ಕೆ ನನ್ನ ಸಹಪಾಠಿ ಸನ್ಮತಿ ಉತ್ತರಿಸಿ ನನಗೆ ಆ ಕಥೆಯ ಬಗ್ಗೆ ತಿಳಿದೇ ಇಲ್ಲ ಎಂದಿದ್ದಳು. ಆಗ ನಾನು ಆ ಕಥೆಯನ್ನು ಅವಳಿಗೆ ಕಳಿಸಬೇಕು ಎಂದುಕೊಂಡೆ. ಅಷ್ಟು ದೊಡ್ಡ ಕಥೆಯನ್ನು ಕಳಿಸುವ ಬದಲು ನಾನೇ ಏಕೆ ಅದನ್ನು ಸಂಕ್ಷಿಪ್ತವಾಗಿ ಕನ್ನಡದಲ್ಲಿ ಬರೆಯಬಾರದು ಎನ್ನಿಸಿತು. ಆ ಕಥೆಯನ್ನು ಕನ್ನಡಲ್ಲಿ ಬರೆಯಬೇಕೆಂಬ ಅಸೆ ಮುಂಚಿನಿಂದಲೂ ಇತ್ತು. ಈ ನೆಪದಲ್ಲಿ ಆ ಕಥೆಯ ಸಾರಾಂಶವನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ಮ ಸಂಸ್ಕೃತಿಗೆ ಹೊಂದುವಂತೆ ಬರೆದೆ. ಆದರೆ ಅದನ್ನು ಕಳಿಸುವಷ್ಟರಲ್ಲಿ ಸನ್ಮತಿ ಈ ಲೋಕವನ್ನು ಬಿಟ್ಟು ಹೋಗಿದ್ದಳು. 

ಇಂದು ಅದೇ ಕಥೆಯನ್ನು ಕನ್ನಡ ಮತ್ತು ಇಂಗ್ಲಿಷ್ನಲ್ಲಿ, ಸ್ನೇಹಿತೆ ಸನ್ಮತಿಯ ನೆನಪಿನೊಂದಿಗೆ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ, 


ನಾನು ಹೇಳುತ್ತಿರುವುದು ಸುಮಾರು ಎಂಭತ್ತು ವರ್ಷಗಳ ಹಿಂದಿನ ಕಥೆ. ಆಗ ಕಾಲ ಇಂದಿನಷ್ಟು ಮುಂದುವರೆದಿರಲಿಲ್ಲ.

ಬೆಂಗಳೂರಿನ ಬಳಿಯ ಊರೊಂದರಲ್ಲಿ ರಾಮಪ್ಪ, ಭೀಮಪ್ಪ ಎಂಬ ಇಬ್ಬರು ಹಿರಿಯರು ವಾಸಿಸುತ್ತಿದ್ದರು. ರಾಮಪ್ಪ ಶ್ರೀಮಂತ, ಬೇಕಾದಷ್ಟು ಭೂಮಿ ಇತ್ತು. ಹಾಗೆಂದು ಹಣದ ಮದವಿರಲಿಲ್ಲ, ಜೊತೆಗೆ ಬಹಳ ದೈವ ಭಕ್ತ. ದಯಾಳು. ಅವನ ಮಿತ್ರನಾದ ಭೀಮಪ್ಪ ಅಂತ ಸ್ಥಿತಿವಂತನೇನೂ ಅಲ್ಲ. ತಿನ್ನಲು ಉಣ್ಣಲು ಕೊರತೆ ಇರಲಿಲ್ಲ. ಅವನೂ ಸಹ ದೈವಭಕ್ತ, ಕರುಣಾಳು. ಈ ರಾಮಪ್ಪ ಭೀಮಪ್ಪ ಇಬ್ಬರಿಗೂ ಒಂದು ಅಸೆ ಇತ್ತು. ಅದೇನೆಂದರೆ "ಕಾಲ್ನಡಿಗೆಯಲ್ಲಿ ತಿರುಪತಿಗೆ ಹೋಗಿ ದೇವರ ದರ್ಶನ ಮಾಡಿಕೊಂಡು ಬರಬೇಕು" ಎಂದು. ಆಗ ತಿರುಪತಿಗೆ ಹೋಗಬೇಕು ಎಂದರೆ ಇಂದಿನಂತೆ ಕಾರು, ಬಸ್ಸು ಇರುತ್ತಿರಲಿಲ್ಲ. ದುಡ್ಡಿದ್ದವರಿಗೆ ಎತ್ತಿನ ಗಾಡಿ, ಇಲ್ಲದವರಿಗೆ ಕಾಲ್ನಡಿಗೆ. ನಡೆದು ಹೋಗುವವರು ಕನಿಷ್ಠ ಬಟ್ಟೆ ಬರೆ, ಪಾತ್ರೆ ಗಳನ್ನೂ ಇಟ್ಟುಕೊಂಡು ದಾರಿಯಲ್ಲಿ ತಂಗುತ್ತಾ ಸಾಗುತ್ತಿದ್ದರು. ಕಡೆಗೂ ರಾಮಪ್ಪ, ಭೀಮಪ್ಪನ ಅಸೆ ಈಡೇರುವ ಕಾಲ ಬಂತು. ಇಬ್ಬರೂ ತಿರುಪತಿಗೆ ಹೊರಟರು.

ರಾಮಪ್ಪನ ಬಳಿ ಸಾಕಷ್ಟು ಹಣ ಇತ್ತು. ಭೀಮಪ್ಪ ಸ್ವಲ್ಪವೇ ಹಣ ಇಟ್ಟುಕೊಂಡು ಹೊರಟಿದ್ದ. ಕಾಲ್ನಡಿಗೆ ಯಲ್ಲಿ ಸಾಗುವಾಗ ದಾರಿಯಲ್ಲಿ ಸಂಜೆಯ ವೇಳೆ ಸಿಗುವ ಹಳ್ಳಿಯಲ್ಲಿ ಅವರು ತಂಗುತ್ತಿದ್ದರು. ಹಾಗೆಯೆ ಅಲ್ಲಿನ ಬಡಬಗ್ಗರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಆಗ ಇಂದಿನಂತೆ ಹೋಟೆಲ್ಗಳು ಇರುತ್ತಿರಲಿಲ್ಲ. ಮನೆಯವರೂ ಉದಾರವಾಗಿ ಅತಿಥಿಗಳಿಗೆ ಊಟ ನೀಡುತ್ತಿದ್ದರು. ಅದರಲ್ಲೂ ತಿರುಪತಿಗೆ ಹೊರಟಿದ್ದಾರೆ ಎಂದರೆ ಅವರಿಗೆ ಇನ್ನೂ ಹೆಚ್ಚಿನ ಮರ್ಯಾದೆ ಕೊಡುತ್ತಿದ್ದರು. ದುಡ್ಡಿದ್ದವರು ತಮ್ಮಲ್ಲಿದ್ದ ಸ್ವಲ್ಪ ಹಣವನ್ನು ಹಳ್ಳಿಯ ಜನರಿಗೆ ಇನ್ಯಾವುದೋ ರೂಪದಲ್ಲಿ ಹಿಂತಿರುಗಿಸುತ್ತಿದ್ದರು. ಹೀಗೆ ರಾಮಪ್ಪ, ಭೀಮಪ್ಪ ಇಬ್ಬರ ಪ್ರಯಾಣ ಸುಖವಾಗಿ ಸಾಗಿತ್ತು.

ಅವರು ಹೀಗೆಯೇ ಮುಂದೆ ಸಾಗಿದಾಗ ಸಂಜೆ ಸಿಕ್ಕಿದ ಒಂದು ಸಣ್ಣ ಹಳ್ಳಿಯಲ್ಲಿ ಬಹಳ ಬಡತನ ಇತ್ತು. ಬದುಕು ನಡೆಸಲು ಜನ ಕಷ್ಟ ಪಡುತ್ತಿದ್ದರು. ಇದನ್ನು ಕಂಡ ರಾಮಪ್ಪ ಭೀಮ್ಮಪ್ಪ ಇಬ್ಬರಿಗೂ ಮನ ಕರಗಿತು. ತಮ್ಮ ಹಣದಿಂದ ತಾವೇ ಬೇರೆಕಡೆಯಿಂದ ಊಟ ತರಿಸಿ ಸಹಾಯ ಮಾಡಿದರು ಆದರೆ ಎಷ್ಟು ದಿನ ಮಾಡಲು ಸಾಧ್ಯ? ರಾಮಪ್ಪ ತಾನು ಮುಂದೆ ಹೊರಡುವೆ ಎಂದು ನಿರ್ಧರಿಸಿದ. ಆದರೆ ಭೀಮಪ್ಪನಿಗೆ ಅಲ್ಲಿನ ಜನರ ಬಡತನ ಕಂಡು ಕಣ್ತುಂಬಿ ಬಂದಿತ್ತು. ಅವನು ನಾನು ಇನ್ನೂ ಸ್ವಲ್ಪ ದಿನ ಇಲ್ಲೇ ಇದ್ದು ಬರುವೆ ಎಂದ. ರಾಮಪ್ಪನಿಗೆ ತನ್ನ ಬಳಿ ಇದ್ದ ಸ್ವಲ್ಪ ಹಣವನ್ನು ಕೊಟ್ಟು ಇದನ್ನು ತಿರುಪತಿ ತಿಮ್ಮಪ್ಪನಿಗೆ ತಲುಪಿಸಿಬಿಡು, ನಾನೂ ಸಾಧ್ಯವಾದರೆ ಬರುತ್ತೇನೆ, ಎಲ್ಲವೂ ದೈವೇಚ್ಛೆ ಯಂತೆ ಆಗುತ್ತದೆ ಎಂದ. ರಾಮಪ್ಪ ತಿರುಪತಿಗೆ ಹೊರಟ, ಭೀಮಪ್ಪ ಅಲ್ಲಿಯೇ ನಿಂತ.

ಭೀಮಪ್ಪ ಆ ಹಳ್ಳಿಯಲ್ಲಿಯೇ ಇದ್ದು ಜನಕ್ಕೆ ಅನೇಕ ಉಪಯುಕ್ತ ಕೆಲಸಗಳನ್ನು ಹೇಳಿಕೊಟ್ಟು, ಅವರಿಗೆ ಗೊತ್ತಿಲ್ಲದ ಅನೇಕ ಸಲಹೆಗಳನ್ನು ಹೇಳಿಕೊಟ್ಟ. ತಾನು ಇದ್ದ ಮನೆಯವರೆಲ್ಲ ಆರೋಗ್ಯವಂತರಾಗುವವರೆಗೂ ಅವರನ್ನು ನೋಡಿಕೊಂಡ. ಅವರಿಗೂ ಅನೇಕ ಉಪಯುಕ್ತ ಸಲಹೆಗಳನ್ನು ಹೇಳಿಕೊಟ್ಟು ತನ್ನ ಕಾಲ ಮೇಲೆ ತಾವು ನಿಲ್ಲುವಂತೆ ಮಾಡಿದ. ಇಷ್ಟೆಲ್ಲಾ ಮಾಡುವ ವೇಳೆಗೆ ಹಲವಾರು ದಿನಗಳು ಕಳೆದಿದ್ದವು. ಅವನ ಬಳಿ ಇದ್ದ ಹಣವೂ ಖಾಲಿಯಾಗಿ ತಿರುಪತಿಗೆ ಹೋಗುವ ಕನಸು ಕನಸಾಗಿಯೇ ಉಳಿಯಿತು. ರಾಮಪ್ಪ ತಾನು ಕೊಟ್ಟ ಹಣವನ್ನು ದೇವರಿಗೆ ಕೊಟ್ಟಿರುತ್ತಾನೆ, ತಿರುಪತಿಗೆ ಹೋಗುವ ನೆಪದಲ್ಲಿ ತಾನು ಬಡವರಿಗೆ ಸಹಾಯ ಮಾಡಿದೆನಲ್ಲ ಅಷ್ಟೇ ಸಾಕು ಎಂದು ತನ್ನ ಊರಿಗೆ ಹೊರಟ.

ಊರಿಗೆ ಹೋದಾಗ ರಾಮಪ್ಪ ತಿರುಪತಿ ಪ್ರವಾಸ ಮುಗಿಸಿಕೊಂಡು ಬಂದಿದ್ದ. ಭೀಮಪ್ಪ ನನ್ನು ಕಂಡು "ನೀನು ತಿರುಪತಿಯಿಂದ ಈಗ ಬರುತ್ತಿದ್ದೀಯಾ?" ಎಂದ. ಆಗ ಭೀಮಪ್ಪ ನಡೆದ ಕತೆಯನ್ನೆಲ್ಲಾ ಹೇಳಿದ. ಆಗ ರಾಮಪ್ಪ "ದೇವರ ದರ್ಶನ ಮುಖ್ಯ, ಅದು ಬಿಟ್ಟು ನೀನು ಅಲ್ಲೇ ಏಕೆ ಉಳಿದೆ, ಅವರನ್ನು ಬಿಟ್ಟು ಬಂದುಬಿಡಬೇಕಿತ್ತು" ಎಂದ. ಆಗ ಭೀಮಪ್ಪ "ದೇವರ ದರ್ಶನದ ಭಾಗ್ಯ ನನಗಾಗಲಿಲ್ಲ, ಆದರೆ ಬಡವರ ಸೇವೆ ಮಾಡಲು ಕಲ್ಪಿಸಿಕೊಟ್ಟ ಆ ದೇವರಿಗೆ ನಾನು ಸದಾ ಋಣಿ" ಎಂದ. ರಾಮಪ್ಪ ನಕ್ಕ, ಆದರೆ ಭೀಮಪ್ಪ ನಗಲಿಲ್ಲ, ಮನದಲ್ಲೇ ತಿರುಪತಿ ತಿಮ್ಮಪ್ಪನಿಗೆ ಕೈ ಮುಗಿದ. 


A HELPING HAND IS MORE THAN JUST GOD'S DARSHAN 

– B S Jagadeesha Chandra

The Darshan of God is just one aspect of helping the poor and defenceless. This is the main idea of the narrative. All religions say the same thing, so why do we still have terrorists, retaliation, and religious conflicts? When will these problematic individuals be reached by this straightforward solution? 

I wrote this tale for Architect Sanmathy, a classmate and close friend. We kept in touch with our WhatsApp group. I once brought up Leo Tolstoy's narrative when someone spoke about the value of helping the poor. I was unable to share the original tale with her, and she was unaware of it. Rather than translating the story exactly, I wrote a brief Kannada version. Unfortunately, she passed away before I could send her the same story. 

This story is being presented in memory of my friend Sanmathy, in Kannada and English

I am recounting an incident that occurred almost eight decades ago.  Our nation was not as developed at the time as it is now.

 The town where Ramappa and Bhimappa lived was close to Bangalore.  Ramappa was wealthy, unconcerned with money, and an ardent devotee of God.  Bhimappa, his ally, was an ordinary person—not particularly wealthy, but also not impoverished.  He was a kind and spiritual man.

The goal of both Ramappa Bhimappa's lives was "to visit Tirupati on foot and make a Darshan of God."  Travelling to Tirupati was one of the most difficult tasks at the time.  One needs to make savings enough cash and clothes.  Only the wealthy used to travel on bullock carts because there were not any automobiles.  In the past, people who preferred to walk would stop at villages along the route.  Villagers were also quite courteous and used to pay extra attention to pilgrims travelling to Tirupati.  The time has finally come to grant Ramappa and Bhimappa their aspirations.  They headed out on their pilgrimage.

Because he was wealthy, Ramappa had plenty of money, while Bhimappa just kept a small amount.  On their journey, they would spend the night in locales.  They used to aid the underprivileged in communities as part of their pilgrimage.   Hotels did not exist as they do now.  The guests were lavishly fed by farmers.  Those who could afford it were giving back a portion of their service fees.  Consequently, Ramappa and Bhimappa's travel proceeded successfully.

They chose to rest when they arrived at a little settlement in the late evening.  The village was in dreadful shape, and the residents were struggling for their lives.  In exchange for donating some cash, Ramappa and Bheemappa were able to obtain some food.  Ramappa prepared to start his journey the following day because his goal was to reach Tirupathi.  However, Bheemappa was deeply moved by the villagers' plight and made the decision to remain for a few more days in order to assist them.  Ramappa received a sum of money from Bheemappa for offering to God on his behalf.  Bheemappa remained in the village when Ramappa left.

It brought Bheemappa joy to serve those impoverished villagers.  He helped sick people recover, provided them lifestyle advice, and encouraged them to take charge of their own lives.  After a few days, the villagers were much better thanks to Bheemappa's assistance.  His desire of visiting Thirupathi was not realised since he used the majority of his leftover funds to help the locals.

Ramappa was already at his village when he returned.  He made the pilgrimage to Thirupathi successfully.  He accused Bheemappa of remaining in that impoverished area after learning that he had not travelled to Thirupathi.  He informed Bheemappa that the most important thing is God's darshan.  However, Bheemappa never felt regret because, in his view, helping the underprivileged was far more important than receiving God's blessing.  He presented his Pranams to God Thimmappa of Thirupathi and conveyed a heartfelt thanks to God for providing the chance to help the underprivileged.


Friday, May 23, 2025

ಹಂಚಿ ತಿನ್ನೋಣ , Let's eat and share

 

ಹಂಚಿ ತಿನ್ನೋಣ - ಜಗದೀಶ ಚಂದ್ರ ಬಿ ಎಸ್ -

"ಅಮ್ಮ ಇಂದು ನೀನು ಕೊಟ್ಟ ತಿಂಡಿಯನ್ನು ನಾನೊಬ್ಬಳೆ ತಿಂದು ಬಿಟ್ಟೆ. ಅದು ತುಂಬಾ ಚೆನ್ನಾಗಿತ್ತು, ಅದಕ್ಕೆ ನಾನು ಯಾರಿಗೂ ಕೊಡಲೇ ಇಲ್ಲ" ಎಂದು ಪುಟ್ಟಿ ಮುಗ್ಧವಾಗಿ ನಿಜ ಹೇಳಿದಾಗ, ಅಮ್ಮ, "ಕಂದ ಕೊಟ್ಟಿದ್ದನ್ನು ಹಂಚಿಕೊಂಡು ತಿನ್ನಬೇಕು, ನಿಜ ಹೇಳಿದೆಯಲ್ಲ ಜಾಣೆ ನೀನು" ಎಂದು ಹೇಳಿದಳು.

ಇನ್ನೊಂದು ದಿನ, ಮನೆಯಲ್ಲಿ ಕೆಲಸದವಳ ಮಗು ಹಸಿವು ಹಸಿವು ಎಂದು ಅವಳ ಅಮ್ಮನನ್ನು ಕಾಡುತ್ತಿತ್ತು. ಮನೆಯಲ್ಲಿ ತಿಂಡಿ ಬೇಕಾದಷ್ಟು ಇದ್ದರೂ ಅಮ್ಮ ಸುಮ್ಮನೆ ಇದ್ದಾಳಲ್ಲ ಎಂದು ಪುಟ್ಟಿ ಯೋಚಿಸಿ, ಅಮ್ಮನ ಬಳಿ ಹೋಗಿ, "ಅಮ್ಮ ಇಂದು ನನಗೆ ತಿಂಡಿಯನ್ನು ಡಬ್ಬಿಯಲ್ಲಿ ಹಾಕಿಕೊಡು, ನಾನು ತಿನ್ನಬೇಕು" ಎಂದಳು. ಅಮ್ಮ "ಇಂದು ರಜಾ, ಡಬ್ಬಿ ಏಕೆ" ಎಂದಾಗ, ಪುಟ್ಟಿ "ನೀನು ಡಬ್ಬಿಯಲ್ಲಿ ಕೊಟ್ಟರೆ ತಾನೆ ಹಂಚಿಕೊಂಡು ತಿನ್ನುವುದು, ಅದಕ್ಕೆ ನನಗೆ ಡಬ್ಬಿಯಲ್ಲೇ ಬೇಕು" ಎಂದು ಹಠ ಮಾಡಿದಳು. "ಸಧ್ಯ ತಾನೇ ಕೇಳಿ ತಿಂಡಿ ತಿನ್ನಲು ಒಪ್ಪಿದ್ದಾಳಲ್ಲ, ನೋಡೋಣ, ತಿಂಡಿಯನ್ನು ಯಾರೊಂದಿಗೆ ಹಂಚಿಕೊಂಡು ತಿನ್ನುತ್ತಾಳೋ ನಮ್ಮ ಮುದ್ದು ಪುಟ್ಟಿ" ಎಂದು ಅಮ್ಮ ಸ್ವಲ್ಪ ಹೆಚ್ಚು ತಿಂಡಿಯನ್ನು ಡಬ್ಬಿಗೆ ಹಾಕಿ ಕೊಟ್ಟಳು. ಕೂಡಲೇ ಪುಟ್ಟಿ ಸಂತೋಷದಿಂದ ಓಡಿಹೋಗಿ ಕೆಲಸದವಳ ಮಗುವನ್ನು ಬಾ, ನಾವು ಶಾಲೆ ಆಟ ಆಡೋಣ ಎಂದು ಕರೆದು, ಆಟವಾಡಿದ ನಂತರ ಮಗುವಿಗೂ ತನ್ನ ಡಬ್ಬಿಯಲ್ಲಿನ ತಿಂಡಿಯನ್ನು ಹಂಚಿಕೊಂಡಾಗ, ಪುಟ್ಟಿಯ ಅಮ್ಮನ ಕಣ್ಣಲ್ಲಿ ನೀರಾಡಿತ್ತು. ಮಕ್ಕಳಾಗಿದ್ದಾಗಿನ ಇಂತಹ ಒಳ್ಳೆಯ ಬುದ್ಧಿಗಳು ನಂತರ ಎಲ್ಲಿ ಹೋಗಿಬಿಡುತ್ತದೋ ಎಂದು ನಿಟ್ಟುಸಿರು ಬಿಟ್ಟಳು.

 Let's eat and share  - Jagadish Chandra B.S - 

The adorable child, Putty, naively informed her mother, "Mom, I ate all of today's goodies by myself since they were so delicious.  I kept it from all of my friends.  "You're a good girl, aren't you? Haven't I told you to share and eat with your friends?" Mom then said to Putty.  Feeling guilty, Putty said, "I'm sorry, mom. I promise not to do this again."

A few days went by.  The maid's child once haunted her mother because she was starving.  As Putty saw this, she began to think and reflect.  Why is Mom not providing that poor girl with any snacks when there are so many snacks available at home?   Following this, Putty made the decision to take action to address the issue.  "Mom, please give me some tiffin in my tiffin box," she asked as she approached her mom.  "Why do you want tiffin in the tiffin box when today is a holiday?" said the surprised mother.   Putty then retorted, "I can share with others and eat as you mentioned the other day if you give in a tiffin box."  Mom was wondering what would happen after she put the snacks in her tiffin box.

Putty was thrilled and hurried to the garden right away to invite the maid's youngster to play.  Puttty informed the child, "Today, let's play 'school drama,' in which we are both classmates," as she approached her.  A short while later, Putty said to the child, "Let's eat together; it's lunchtime."  She gave the child some of her mother's goodies, and they both had fun playing together.  The hungry small child was overjoyed.  When Mom saw her kid acting so sweet and innocent, her eyes welled up with tears.

"At this age, innocent children are so pure and good, but as they grow older, they completely change their behaviour with the influence of surroundings," she muttered to herself.   Isn't what she said right? 

Thursday, May 22, 2025

Kogile hadide kelideya / S Janaki, Rajkumar / M Rangarao /Keyboard - Jag...


ಕೋಗಿಲೆ ಹಾಡಿದೆ ಕೇಳಿದೆಯ / KOGILE HAADIDE KELIDEYA
ಚಿತ್ರ - ಸಮಯದ ಗೊಂಬೆ / ಎಸ್ ಜಾನಕಿ, ಡಾ. ರಾಜಕುಮಾರ್ / ಚಿ ಉದಯಶಂಕರ / ಎಂ ರಂಗರಾವ್ / ಕೀಬೋರ್ಡ್ - ಜಗದೀಶ ಚಂದ್ರ Film: SAMAYADA GOMBE / Singer: Dr RAJKUMAR, S JANAKI / Lyrics: CHI UDAYASHANKAR / Music: M RANGA RAO / Keyboard - Jagadeesha Chandra
M Rangarao's work in the Rag Kalyani (Yaman) is lovely and melodic. Chi Udayashankar penned a song that is inspiring. Although the song is sung by the child's mother to celebrate their birthday, it eventually becomes a brother's remembrance of his early years spent with his parents and sister. One of Yaman's or Rag Kalyani's greatest songs. Rajkumar and S Janaki are the singers.
ಎಂ ರಂಗರಾವ್ ಅವರು ಕಲ್ಯಾಣಿ ಅಥವಾ ಯಮನ್ ರಾಗದಲ್ಲಿ ರಾಗ ಸಂಯೋಜಿಸಿರುವ ಮನಮೋಹಕ ಗೀತೆ. ಸುಶ್ರಾವ್ಯವಾಗಿ ಹಾಡಿದ್ದಾರೆ. ಎಸ್ ಜಾನಕಿ ಮತ್ತು ರಾಜಕುಮಾರ್ ಅವರು. ಇದು ತಾಯಿಯು ಮಗಳ ಹುಟ್ಟು ಹಬ್ಬದ ದಿನ ಹಾಡುವ ಹಾಡಾದರೂ, ನಂತರ ಅಣ್ಣನು ತನ್ನ ತಂಗಿ, ತಂದೆ ತಾಯಿಯರ ನೆನಪು ಮಾಡಿಕೊಂಡು ಹಾಡುವ ಹಾಡಾಗಿ ಬಿಡುತ್ತದೆ. ಮನಮುಟ್ಟುವ ಸಾಹಿತ್ಯ ಕೊಟ್ಟಿರುವ ಚಿ ಉದಯಶಂಕರ್ ಅಭಿನಂದನಾರ್ಹರು.


ಕೋಗಿಲೆ ಹಾಡಿದೆ ಕೇಳಿದೆಯ, ಹೊಸ ರಾಗವ ಹಾಡಿದೆ ಆಲಿಸೆಯ ।೨। ಹೊಸ ಹೊಸ ಭಾವ ಕುಣಿಸುತ ಜೀವ ।೨। ಮರೆಸುತ ನೋವ ಪ್ರೇಮವ ತುಂಬಿ ಕೋಗಿಲೆ ಹಾಡಿದೆ ಕೇಳಿದೆಯ, ಹೊಸ ರಾಗವ ಹಾಡಿದೆ ಆಲಿಸೆಯ ಅಮ್ಮನು ಕಂದನ ಕೂಗುವ ಹಾಗೆ, ತಂಗಿಯು ಅಣ್ಣನ ಹುಡುಕುವ ಹಾಗೆ ಅಮ್ಮನು ಕಂದನ ಕೂಗುವ ಹಾಗೆ, ತಂಗಿಯು ಅಣ್ಣನ ಹುಡುಕುವ ಹಾಗೆ ಪ್ರೀತಿಯ ಚಿಲುಮೆ ಉಕ್ಕುವ ಹಾಗೆ ಕಾತರದಿಂದ ಪಂಚಮ ಸ್ವರದೆ ಕೊಳಲಿಂದ ಹೊರಬಂದ ಸಂಗೀತದಂತೆ /ಕೋಗಿಲೆ / ಕಾಣದ ಸಿರಿಯ ನೋಡಿದ ಹಾಗೆ, ಸ್ವರಗಳ ಮಾಣಿಕ್ಯ ದೊರಕಿದ ಹಾಗೆ ಬಾಳಲಿ ಬೆಳಕು ಮೂಡಿದ ಹಾಗೆ, ಸಡಗರ ಬದುಕಲಿ ತುಂಬುವ ಹಾಗೆ ಬಾಡಿದ ಬಳ್ಳಿ ಚಿಗುರಿದ ಹಾಗೆ, ಇರುಳಲಿ ಜ್ಯೋತಿ ಬೆಳಗಿದ ಹಾಗೆ ಸವಿಯಾಗಿ ಇಂಪಾಗಿ ಆನಂದದಿಂದ /ಕೋಗಿಲೆ / ಕಂಗಳು ಕನಸು ಕಾಣುವ ಹಾಗೆ, ತಿಂಗಳ ಬೆಳಕು ತುಂಬಿದ ಹಾಗೆ ಹೃದಯದ ನೈದಿಲೆ ಅರಳಿದ ಹಾಗೆ, ಹರುಷದ ಹೊನಲು ಹೊಮ್ಮಿದ ಹಾಗೆ ನೆನಪಿನ ಅಲೆಯಲಿ ತೇಲಿದ ಹಾಗೆ, ನೋವೋ ನಲಿವೋ ತಿಳಿಯದ ಹಾಗೆ ಸಂಗೀತ ಸುಧೆಯಿಂದ ಸುಖ ನೀಡುವಂತೆ /ಕೋಗಿಲೆ /

ಬೀಸುವ ಪದ - Folk song sung while grinding grains / ಕನ್ನಡ ಜಾನಪದ ಹಾಡು Keyb...

ಬೀಸುವ ಪದ   Folk song sung while grinding grains.  Folk song of Karnataka    ಕನ್ನಡ ಜಾನಪದ ಹಾಡು  ಕೀಬೋರ್ಡ್ - ಜಗದೀಶ ಚಂದ್ರ  Keyboard - Jagadeesha ...